ಸುದ್ದಿ ಸಂಕ್ಷಿಪ್ತ
ಜ.2ರಂದು ಆರೋಗ್ಯ ಉಪನ್ಯಾಸ : ಸಂಗೀತ ಕಾರ್ಯಕ್ರಮ
ಮೈಸೂರು, ಜ.1 : ವಿಜಯನಗರದಲ್ಲಿರುವ ಆಯುರ್ವೇದ ಪಂಚಕರ್ಮ ಆಸ್ಪತ್ರೆ ದೀಕ್ಷಿತ್ ಆರೋಗ್ಯ ಧಾಮವು ಜ.2ರ ಸಂಜೆ 6ರಂದು ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಚಳಿಗಾಲದಲ್ಲಿ ಆರೋಗ್ಯ ಮತ್ತು ಆಹಾರ ವಿಷಯವಾಗಿ ಡಾ.ಸಿ.ಎಸ್.ಅನಿಲ್ ಕುಮಾರ್ ಉಪನ್ಯಾಸ ನೀಡುವರು, ವಿದ್ವಾನ್ ಹರೀಶ್ ಪಾಂಡವ್ ಅವರಿಂದ ಸ್ಯಾಕ್ಸೋಪೋನ್ ವಾದನವಿದೆ. ಮಾಹಿತಿಗಾಗಿ ದೂ.ಸಂ. 0821 2511619 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್ಪಿ)