ಸುದ್ದಿ ಸಂಕ್ಷಿಪ್ತ
ದತ್ತಿ ಉಪನ್ಯಾಸ ಫೆ.10
.ಮೈಸೂರು, ಫೆ.8 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮಹಾರಾಣಿ ಮಹಿಳಾ ಕಲಾ ಕಾಲೇಜು ಸಂಯುಕ್ತವಾಗಿ ದತ್ತಿ ಉಪನ್ಯಾಸವನ್ನು ಫೆ.10ರ ಮಧ್ಯಾಹ್ನ 12ಕ್ಕೆ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಆಯೋಜಿಸಿದೆ.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿವಿಯ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಉದ್ಘಾಟಿಸುವರು, ಡಾ.ಪಿ.ಕೆ.ರಾಜಶೇಖರ್, ಡಾ.ಎಂ.ಚನ್ನಬಸವೇಗೌಡ, ಡಾ.ಎಸ್.ಶಿವರಾಜಪ್ಪ ಮೊದಲಾದ ವಿದ್ವಾಂಸರು ಭಾಗವಹಿಸುವರು. (ಕೆ.ಎಂ.ಆರ್)