
ಮೈಸೂರು
ರಂಗಾಯಣದಲ್ಲಿ ಗುಚ್ಛ – ಸ್ವಪ್ನಸಿದ್ಧಿ ನಾಟಕ ಪ್ರದರ್ಶನ ನ.26ರಂದು
ರಂಗಾಯಣದ ವನರಂಗದಲ್ಲಿ ನ.26ರಂದು ಸಂಜೆ 7 ಗಂಟೆಗೆ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಕುವೆಂಪು ಅವರ ಗುಚ್ಛ – ಸ್ವಪ್ನಸಿದ್ಧಿ ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ನಾಟಕ ಪ್ರದರ್ಶನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವವಿದ್ದು, ಪ್ರಸ್ತುತಿ ರಂಗದರ್ಶನ ಪ್ರದರ್ಶನ ಕಲಾ ಕೇಂದ್ರ, ಬೆಂಗಳೂರಿನ ತಂಡದ ಕಲಾವಿದರು ಅಭಿನಯಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.