
ಮೈಸೂರು
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 3ನೇ ಪುಣ್ಯ ತಿಥಿ
ಮೈಸೂರಿನ ಮಧುವನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮೂರನೇ ಪುಣ್ಯತಿಥಿಗೆ ಸಿದ್ಧಗೊಳ್ಳುತ್ತಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 10 ಡಿಸೆಂಬರ್ 2013 ನಿಧನರಾಗಿದ್ದು, ಶನಿವಾರ(ನಾಳೆ) ಮೂರು ವರ್ಷ ಪೂರ್ಣಗೊಳ್ಳಲಿದ್ದು, ಪುಣ್ಯ ತಿಥಿ ನಡೆಯಲಿದೆ. ಅದಕ್ಕಾಗಿ ಅವರ ಸ್ಮಾರಕವಿರುವ ಮಧುವನವನ್ನು ಶುಕ್ರವಾರ ಸ್ವಚ್ಛಗೊಳಿಸಲಾಗಿದೆ. ಶನಿವಾರ ಬೆಳಿಗ್ಗೆ ಮೈಸೂರು ರಾಜಮನೆತನದವರಿಂದ ಮಧುವನದಲ್ಲಿ ಪೂಜೆ ಪುನಸ್ಕಾರಗಳು ನಡೆಯಲಿವೆ. ಪೂಜೆಯ ಬಳಿಕ ಸಾರ್ವಜನಿಕರಿಗೆ ದರ್ಶನ ಲಭ್ಯವಿದೆ.