
ಮೈಸೂರು
ಜಾತ್ಯಾತೀತ ಶಕ್ತಿಗಳ ಬಲವರ್ಧನೆಗಾಗಿ ಪ್ರಾರ್ಥನೆ
ಮೈಸೂರು,ಜೂ.11:- ಮೈಸೂರಿನಲ್ಲಿ ಜಾತ್ಯಾತೀತ ಶಕ್ತಿಗಳ ಬಲವರ್ಧನೆಗಾಗಿ ಪ್ರಗತಿಪರ ಸಂಘಟನೆಗಳು ಚಾಮುಂಡಿ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಿವೆ.
ನಿನ್ನೆ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಪ್ರಾರ್ಥನೆ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆಗೈದರು. ಈ ಸಂದರ್ಭ ಉರಿಲಿಂಗ ಪೆದ್ದ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ದೇಶವನ್ನು ಕೋಮು ಶಕ್ತಿಗಳು ಆಳುತ್ತಿವೆ. ದೇಶದಲ್ಲಿ ಆಯುಧಗಳ ಖರೀದಿ ಹೆಚ್ಚಾಗಿದೆ. ಇಂತಹ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಜಾತ್ಯಾತೀತ ಶಕ್ತಿಗಳು ಒಂದಾಗುವ ಅನಿವಾರ್ಯತೆ ಬಂದಿದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)