ಸುದ್ದಿ ಸಂಕ್ಷಿಪ್ತ
‘ಮಕ್ಕಳ ರಂಗಹಬ್ಬ’ ಇಂದು
ಕುಕ್ಕರಹಳ್ಳಿಯ ಸರ್ಕಾರಿ ಪ್ರೌಢಶಾಲೆಯೂ ನಿರಂತರ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಘೂ ರವಿವರ್ಮಾ ಚಿತ್ರಕಲಾ ಶಾಲೆ ಸಹಯೋಗದಲ್ಲಿ ಮಕ್ಕಳ ರಂಗಹಬ್ಬ’ವನ್ನು ಡಿ.16ರಂದು ಮಧ್ಯಾಹ್ನ 2ಕ್ಕೆ ಹಮ್ಮಿಕೊಂಡಿದೆ. ಮೆರವಣಿಗೆಗೆ ನಿವೃತ್ತ ಬಿಇಓ ಎಂ.ಅಂದಾನಿ ಚಾಲನೆ ನೀಡುವರು, ಕಸದ ಬೂತ ಬೀದಿನಾಟಕ, ಚಿತ್ರಕಲಾ ಪ್ರದರ್ಶನ, ಪುಣ್ಯಕೋಟಿ ಜಾನಪದ ನಾಟಕವಿರುವುದು. ಮಕ್ಕಳ ರಂಗಹಬ್ಬವನ್ನು ಶಾಸಕ ವಾಸು ಚಾಲನೆ ನೀಡುವರು, ಮಾಜಿ ಮೇಯರ್ ಆರ್.ಲಿಂಗಪ್ಪ ಅಧ್ಯಕ್ಷತೆ ವಹಿಸುವರ. ನಂತರ ಚಿಲ್ಡ್ರೆನ್ಸ್ ಲಿಟರರಿ ಕ್ಲಬ್ನ ಡಾ.ಆರ್.ಪೂರ್ಣಿಮಾರಿಂದ ಏಕಪಾತ್ರಾಭಿನಯವಿದೆ.