
ಮೈಸೂರು
ಸಾಲ ಮರುಪಾವತಿಸಲಾಗದ ಹಿನ್ನೆಲೆ : ವ್ಯಕ್ತಿ ನೇಣಿಗೆ ಶರಣು
ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರು ನೇಣಿಗೆ ಶರಣಾದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕುವೆಂಪುನಗರದ ಎಲ್.ಐ.ಸಿ ಕಾಲೋನಿಯ ನಿವಾಸಿ ವಿಜೇಂದ್ರ (35) ಎಂದು ಗುರುತಿಸಲಾಗಿದೆ.
ಸ್ವಂತಕ್ಕಾಗಿ ನಾಲ್ಕು ಲಕ್ಷರೂ.ವನ್ನು ಸಾಲ ಪಡೆದಿದ್ದು, ಅದನ್ನು ಮರು ಪಾವತಿಸಲಾಗದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.