
ಮೈಸೂರು
ಸಿದ್ಧಗಂಗಾ ಶ್ರೀ ಪ್ರಶಸ್ತಿ ಪಡೆದ ಡಾ. ಶಿವರಾಜಪ್ಪ ಅವರಿಗೆ ಅಭಿನಂದನೆ
ಗಾಂಧಿ ಭವನದ ನಿರ್ದೇಶಕ ಡಾ|| ಎಸ್. ಶಿವರಾಜಪ್ಪ ಅವರ ಜೀವಮಾನದ ಸಾಧನೆಗಾಗಿ “ತುಮಕೂರಿನ ಸಿದ್ಧಗಂಗಾ ಶಿವಕುಮಾರ ಶ್ರೀ ಪ್ರಶಸ್ತಿ” ಪಡೆದ ಪ್ರಯುಕ್ತ ಮಿತ್ರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಚಿತ್ರದಲ್ಲಿ ಕೆ. ರಘುರಾಂ, ಪ್ರೊ. ನೀ. ಗಿರಿಗೌಡ, ಎಂ.ಬಿ. ವಿಶ್ವನಾಥ್, ಬೋಗಾದಿ ಸಿದ್ದೇಗೌಡ, ಮೈಸೂರು ವಿಶ್ವವಿದ್ಯಾಲಯ ಎಸ್.ಸಿ/ಎಸ್.ಟಿ ವಿಶೇಷ ಘಟಕದ ಉಪಕುಲಸಚಿವ ಬಿ.ಎಸ್. ನಾಗರಾಜು, ಹಾಗೂ ಇತರರು ಉಪಸ್ಥಿತರಿದ್ದರು.