ಸುದ್ದಿ ಸಂಕ್ಷಿಪ್ತ
ಗೌರವ ಸಮರ್ಪಣೆ ಸಮಾರಂಭ
ಅರಸು ಚಿಂತಕ ಚಾವಡಿ ವತಿಯಿಂದ ಜನವರಿ 1 ರಂದು ಸಂಜೆ 5 ಗಂಟೆಗೆ ರೋಟರಿ ಸಭಾಂಗಣದಲ್ಲಿ ಅರಸು ಜನಾಂಗದ ಸಾಧಕರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಏರ್ಪಡಿಸಲಾಗಿದೆ.
ಅರಸು ಚಿಂತಕ ಚಾವಡಿಯ ಅಧ್ಯಕ್ಷ ಕೆಂಪರಾಜೇ ಅರಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಆರ್.ಜಯರಾಮೇ ಅರಸ್, ಲಕ್ಷ್ಮೀಕಾಂತರಾಜೇ ಅರಸ್, ಶಿವೇಂದ್ರ ಜಿ.ಅರಸ್, ಚಂಪ ಅರಸ್ ಮತ್ತು ಬಿ.ಕೆ.ರಾಜೇ ಅರಸ್ ಅವರಿಗೆ ಹಿರಿಯ ಸಾಹಿತಿ ಕೆ.ಭೈರವಮೂರ್ತಿ ಗೌರವ ಸಮರ್ಪಣೆ ಮಾಡಲಿದ್ದಾರೆ.