ಸುದ್ದಿ ಸಂಕ್ಷಿಪ್ತ
ಪೌರಾಣಿಕ ನಾಟಕ ‘ಮನ್ಮಥ ವಿಜಯ’ ಪ್ರದರ್ಶನ ನಾಳೆ
ಮೈಸೂರು,ಆ.11 : ರಂಗಾಯಣದ ಕಲಾವಿದರಿಂದ ಗಿರಿಭಟ್ಟರ ತಮ್ಮಯ್ಯ ವಿರಚಿತ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ ‘ಮನ್ಮಥ ವಿಜಯ’ ಪ್ರದರ್ಶನವನ್ನು ಆ.12ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಸಂಗೀತ ಮತ್ತು ನಿರ್ದೇಶನ ವೈ.ಎಂ.ಪುಟ್ಟಣ್ಣಯ್ಯ ಅವರದು, ಹೆಚ್.ಕೆ.ದ್ವಾರಕನಾಥ್ ಅವರಿಂದ ರಂಗವಿನ್ಯಾಸ, ಮಹದೇವ್ ರಂಗ ನಿರ್ವಹಣೆ, ಡಾ.ತುಳಸಿ ರಾಮಚಂದ್ರ ಅವರಿಂದ ನೃತ್ಯ ಸಂಯೋಜನೆ ಮಾಡಲಾಗಿದೆ. (ಕೆ.ಎಂ.ಆರ್)