
ಮೈಸೂರು
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಮೈಸೂರು,ಆ.22:- ಮಾಜಿ ನಗರ ಪಾಲಿಕೆ ಸದಸ್ಯ ಹಾಗೂ ಬಿಜೆಪಿ ಮುಖಂಡರುಗಳಾದ ಎಂ ಸಿ ಚಿಕ್ಕಣ್ಣ,ಪುರುಷೋತ್ತಮ್,ಕುವೆಂಪುನಗರ ಲಿಂಗರಾಜು,ಟೈಲರ್ ರಮೇಶ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ ಕಾಂಗ್ರೆಸ್ ನಗರ ಕಾರ್ಯದರ್ಶಿ ಡೈರಿ ವೆಂಕಟೇಶ್,ಉರುಳು ಸೇವೆ ಸೋಮು,ಕಂಸಾಳೆ ರವಿ,ಪೈಲ್ವಾನ್ ರವಿ (ಮಣಿರಾಜ್ ಅಳಿಯ) ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)