
ಮೈಸೂರು
ಜೂಜಾಡುತ್ತಿದ್ದವರ ಬಂಧನ: ಪಣಕ್ಕಿಟ್ಟಿದ್ದ ಹಣ ವಶಕ್ಕೆ
ಪಿರಿಯಾಪಟ್ಟಣ: ತಾಲೂಕಿನ ಬೈಲಕುಪ್ಪೆ ಸಮೀಪದ ದೊಡ್ಡಹೊನ್ನೂರಿನ ಕಾವಲಿನ ಅರಣ್ಯದಂಚಿನಲ್ಲಿ ಜೂಜಾಡುತ್ತಿದ್ದವರನ್ನು ಬಂಧಿಸಿ ಪಣಕಿಟ್ಟಿದ್ದ 1490 ರೂ. ಗಳನ್ನು ಬೈಲಕುಪ್ಪೆ ಪೋಲಿಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ವೃತ್ತ ನಿರಿಕ್ಷಕರಾದ ಎಚ್.ಎನ್. ಸಿದ್ದಯ್ಯನವರು ಖಚಿತ ಮಾಹಿತಿಯೊಂದಿಗೆ ಬೈಲಕುಪ್ಪೆ ಸಿಬ್ಬಂದಿಗಳಾದ ಇರ್ಫಾನ್, ಶತ್ರುಘ್ನ, ಎನ್.ಟಿ. ಮಹದೇವ್, ಕೃಷ್ಣ, ಅಶೋಕ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳಾದ ಹರ್ಷದ್ ಉಲ್ಲಾ, ಮಹಮ್ಮದ್ ಅಲ್ತಾಫ್, ಪಾಪು, ಹುಸೇನ್, ಸಲೀಮ್ ಎಂಬುವರೆ ಆರೋಪಿಗಳು. ಇವರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.