ಸುದ್ದಿ ಸಂಕ್ಷಿಪ್ತ
ಅಕ್ರಮ ಶಾಲೆಗಳ ಉನ್ನತೀಕರಣ ಶಿಕ್ಷಣ ಇಲಾಖೆಗೆ ನೀಡಲು ಆಗ್ರಹಿಸಿ ಧರಣಿ ‘ಡಿ.31’
ಅಕ್ರಮ ಶಾಲೆಗಳನ್ನು ಉನ್ನತೀಕರಿಸುವಾಗ ಶಿಕ್ಷಣ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಬುಡಕಟ್ಟು ಕೃಷಿಕರ ಸಂಘದಿಂದ ಡಿ.31ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.