ಸುದ್ದಿ ಸಂಕ್ಷಿಪ್ತ
ರಾಷ್ಟ್ರೀಯ ಗಣಿತ ದಿನ ನಾಳೆ
ಮೈಸೂರು,ಡಿ.21 : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗಣಿತ ಅಧ್ಯಯನ ವಿಭಾಗದಿಂದ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ವಿಚಾರಗೋಷ್ಠಿಯನ್ನು ನಾಳೆ (ಶನಿವಾರ) ಮಧ್ಯಾಹ್ನ 3 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಮೈವಿವಿಯ ಗಣಿತ ವಿಭಾಗದ ಪ್ರೊ.ಬಿ.ಎಸ್.ಕಿರಂಗಿ ಉಪನ್ಯಾಸ ನೀಡಲಿದ್ದಾರೆ ಎಂದು ಕುಲಸಚಿವ ಪ್ರೊ.ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)