ಸುದ್ದಿ ಸಂಕ್ಷಿಪ್ತ
‘ನದಿಯ ಹಾದಿ’ ಪುಸ್ತಕ ಬಿಡುಗಡೆ.26.
ಮೈಸೂರು,ಫೆ.23 : ಮೈವಿವಿಯ ಕುಕಅ.ಸಂ ಮತ್ತು ಅಭಿರುಚಿ ಪ್ರಕಾಶನ ಸಂಯುಕ್ತವಾಗಿ ಅಮ್ಮಯ್ಯ ಶೇಖರ್ ಅವರ ‘ನದಿಯ ಹಾದಿ’ ಪುಸ್ತಕ ಬಿಡುಗಡೆಯನ್ನು ಫೆ.26ರಂದು ಮಾನಸಗಂಗೋತ್ರಿಯ ಕು.ಕ.ಅ.ಸಂ ಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ರಂಗಕರ್ಮಿ ಜನ್ನಿ ಅವರಿಂದ ರಂಗಗೀತೆ, ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಅವರಿಂದ ಕೃತಿ ಬಿಡುಗಡೆ, ಕವಿ ಪ್ರೊ.ಮಹಾದೇವ ಶಂಕನಪುರ ಅವರು ಕೃತಿ ಕುರಿತು ಮಾತನಾಡುವರು. ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)