ಸುದ್ದಿ ಸಂಕ್ಷಿಪ್ತ
ಶಂಕರ ಜಯಂತಿ : ಭಜನಾ ಸ್ಪರ್ಧೆ
ಮೈಸೂರು,ಮಾ.23 : ರಾಮಕೃಷ್ಣನಗರದ ದುರ್ಗಾ ಪರಮೇಶ್ವರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಶಂಕರ ಜಯಂತಿ ಅಂಗವಾಗಿ ಶಂಕರ ಶಾರದಾನುಗ್ರಹ ಭಜನಾಸ್ಪರ್ಧೆಯನ್ನು ಮೇ.5ರ ಬೆಳಗ್ಗೆ 9 ಗಂಟೆಗೆ ಶ್ರೀವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಎರ್ಪಡಿಸಲಾಗಿದೆ.
ಧರ್ಮಾಧಿಕಾರಿ ಹೆಚ್.ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಅರ್ಜುನ ಅವಧೂತ ಮುಖ್ಯ ಅತಿಥಿಗಳಾಗಿದ್ದಾರೆ. (ಕೆ.ಎಂ.ಆರ್)