
ಮೈಸೂರು
ಬಿಜೆಪಿ ಪಕ್ಷದ ಅಲ್ಪ ಸಂಖ್ಯಾತರ ಮೋರ್ಚಾ ಘಟಕದ ಪದಾಧಿಕಾರಿಗಳ ನೇಮಕ
ಮೈಸೂರು,ಜು.16:- ಭಾರತೀಯ ಜನಾಪಕ್ಷ ಮೈಸೂರು ನಗರ (ಜಿಲ್ಲಾ) ಅಲ್ಪ ಸಂಖ್ಯಾತರ ಮೋರ್ಚಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಅಲ್ಪ ಸಂಖ್ಯಾತರ ಮೋರ್ಚಾ ಅಧ್ಯಕ್ಷ ಕಲೀಂ ಪಾಷಾ ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಪಾಧ್ಯಕ್ಷರುಗಳಾಗಿ ನಜೀರ್ ವಿದ್ಯಾರಣ್ಯಪುರಂ, ಅಬ್ದುಲ್ ರೆಹಮಾನ್ ಲಷ್ಕರ್ ಮೊಹಲ್ಲಾ, ಥಾಮಸ್ ವಿದ್ಯಾರಣ್ಯಪುರಂ, ಪ್ರಧಾನ ಕಾರ್ಯದರ್ಶಿಗಳಾಗಿ ಸಂತೋಷ್ ಕುಮಾರ್ ಪೌಲ್ ಚಾಮುಂಡೇಶ್ವರಿ ನಗರ, ನವೀದ್ ಅಹಮದ್ ರಾಜೀವ್ ನಗರ, ಕಾರ್ಯದರ್ಶಿಗಳಾಗಿ ಸಲ್ಮಾ ಬಾನು ಸಾತಗಳ್ಳಿ, ಜಮಾಲ್ ಮಂಡಿಮೊಹಲ್ಲಾ, ಸಾದಿಕ್ ಶ್ರೀರಾಂಪುರ, ಕಾರ್ಯಕಾರಿಣಿ ಸದಸ್ಯರಾಗಿ ಅಮಿರಾ ಮಂಡಿಮೊಹಲ್ಲಾ, ಮಹಮದ್ ಇದಾಯತ್ ರಾಜೀವ್ ನಗರ, ನಿಸರ್ ಅಹ್ಮದ್ ಅನ್ಸಾರಿ ಭರತ್ ನಗರ, ಅಸೀಫ್ ಹುಲ್ಲಾ ಖಾನ್ ರಾಜೀವ್ ನಗರ, ಸ್ಟೀಫನ್ ಜೆ.ಪಿ.ನಗರ, ಅಬ್ದುಲ್ಲಾ ಲಷ್ಕರ್ ಮೊಹಲ್ಲಾ, ಇಸ್ಮಾಯಿಲ್ ಅಗ್ರಹಾರ, ಶೌಕತ್ ಎನ್ ಆರ್.ಮೊಹಲ್ಲಾ, ಚಾರ್ಲ್ಸ್ ಯಾದವಗಿರಿ, ಸಾಜಿದ್ ಅಬ್ರಂ ಆಲಿ ಮಂಡಿ ಮೊಹಲ್ಲಾ, ಅಕ್ಬರ್ ಗ್ಯಾರೇಜ್ ಅಗ್ರಹಾರ ಇವರುಗಳನ್ನು ನೇಮಕ ಮಾಡಲಾಗಿದೆ ಎಂದರಲ್ಲದೇ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. (ಕೆ.ಎಸ್,ಎಸ್.ಎಚ್)