
ಮೈಸೂರು
ಶೀಲ ಶಂಕಿಸಿದ ಪತಿ : ಮನನೊಂದ ಪತ್ನಿ ಆತ್ಮಹತ್ಯೆ
ಪತಿಯೇ ಪತ್ನಿ ಶೀಲ ಶಂಕಿಸಿದ ಕಾರಣ ಮನನೊಂದ ಪತ್ನಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತಳನ್ನು ಮೈಸೂರು ಮಹದೇವಪುರ ನಿವಾಸಿ ರಾಗಿಣಿ ಎಂದು ಹೇಳಲಾಗಿದೆ. ಆರು ವರ್ಷಗಳ ಹಿಂದೆ ರಮೇಶ್ ನನ್ನು ಪ್ರೀತಿಸಿ ವಿವಾಹವಾಗಿದ್ದ ಈಕೆ ಪತಿಯ ಕಿರುಕುಳ ತಾಳಲಾರದೇ ಏ.30 ರಂದು ಮಹದೇವಪುರ ಬಸ್ ನಿಲ್ದಾಣದಲ್ಲಿ ವಿಷದ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. _ (ವರದಿ: ಕೆ.ಎಸ್,ಎಸ್.ಎಚ್)