
ಮೈಸೂರು
ವಿಶೇಷ ಚೇತನ ಮಕ್ಕಳಿಗೆ ಹಣ್ಣು ವಿತರಿಸುವ ಮೂಲಕ ಜನ್ಮದಿನ ಆಚರಣೆ
ಮೈಸೂರು,ಮೇ.21:- ಇಂದು ಭಾರತೀಯ ಜನತಾ ಪಕ್ಷದ ಯುವ ಮುಖಂಡರು ಹಾಗೂ ಚಾಮರಾಜ ವಿಧಾನ ಸಭಾ ಕ್ಷೇತ್ರದ ಎಲ್. ನಾಗೇಂದ್ರ ಅವರ ಸಹೋದರರಾದ ಎಲ್.ಚೌಡಪ್ಪ ಅವರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿ ಬಳಗದವರು, ಸ್ನೇಹಿತರು ಹಾಗೂ ಭಾ.ಜ.ಪ ಮುಖಂಡರು ವಿಭಿನ್ನವಾಗಿ ಆಚರಿಸಿದರು.
ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಹಾಗೂ ಮೈಸೂರು ನಗರದ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗೆ ಹಣ್ಣು ಹಂಚುವ ಮೂಲಕ ಆಚರಿಸಿದರು.
ಈ ಸಮಯಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರವೀಂದ್ರ, ಸುಬ್ಬಯ್ಯ, ಪ್ರಮೀಳಾ ಭರತ್, ರಂಗಸ್ವಾಮಿ, ರಮೇಶ್, ಮುಖಂಡರುಗಳಾದ ರಮೇಶ್, ದಿನೇಶ್ ಗೌಡ, ಚಿರು, ಅವಿನಾಶ್, ಯತೀಶ್, ನಿತಿನ್, ಸಚಿನ್, ದಶರಥ, ರಾಮೇಗೌಡ, ಪಡುವಾರಹಳ್ಳಿ ರಾಮಕೃಷ್ಣ, ಉಮಾಶಂಕರ್, ಶಿವಲಿಂಗಣ್ಣ, ವಿಘ್ನೇಶ್ವರಭಟ್, ತನುಜಾಮಹೇಶ್, ಮಹೇಶ್ ಕುದೇರು, ಅರವಿಂದ, ತಬ್ರೇಜ್, ಚಲುವ, ಮಹೇಶ್ ರಾಜೆ ಅರಸ್, ಶ್ರೀನಾಥ್, ಚರಣ್, ಬಸವರಾಜು, ಅಶೋಕ, ಜಯಣ್ಣ, ಸಂಜೀವಿನಿ ಕುಮಾರ್, ಶಾಂತಿ, ಹರೀಶ್ ಸೇರಿದಂತೆ ಹಲವರು ಇದ್ದರು. (ಕೆ.ಎಸ್,ಎಸ್.ಎಚ್)