
ಕರ್ನಾಟಕಪ್ರಮುಖ ಸುದ್ದಿ
ಸಿದ್ದರಾಮಯ್ಯ ದ್ರಾವಿಡರಾ,ಆರ್ಯರಾ ಎಂದು ಮೊದಲು ಸ್ಪಷ್ಟ ಮಾಡಲಿ ; ಸಿಎಂ ಬೊಮ್ಮಾಯಿ ಸವಾಲು
ರಾಜ್ಯ(ಬೆಂಗಳೂರು),ಮೇ.28 : ಆರ್.ಎಸ್.ಎಸ್ ಮೂಲ ಕೆದಕಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಬೊಮ್ಮಾಯಿ ಮರು ಪ್ರಶ್ನೆ ಹಾಕಿದ್ದು, ಸಿದ್ದರಾಮಯ್ಯ ಮೂಲ ಯಾವುದು..? ಎಲ್ಲಿಂದ ಬಂದಿದ್ದಾರೆ..? ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾಧ್ಯಮದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ದ್ರಾವಿಡರಾ..? ಆರ್ಯರಾ..? ಮೊದಲು ಸ್ಪಷ್ಟ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಇನ್ನೂ ಎಂಇಎಸ್ ಪುಂಡಾಟ ಪ್ರಕರಣಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ಕಾನೂನು ಕೈಗೆತ್ತಿಕೊಂಡರೆ ಯಾರನ್ನೂ ಬಿಡಲ್ಲ, ಎಂಇಎಸ್ಗೆ ನಿನ್ನೆ ಸ್ಪಷ್ಟ ಸಂದೇಶವನ್ನು ಕಳಿಸಿದ್ದೇವೆ ಭಾಷೆ, ಗಡಿ ವಿಚಾರದಲ್ಲಿ ಕ್ಯಾತೆ ಮಾಡಿದ್ರೆ ಸಹಿಸಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿ, ನಮ್ಮ ನೆಲದಲ್ಲಿ ಕಾನೂನು ಭಂಗಕ್ಕೆ ಬಿಡೋದಿಲ್ಲ, ಕನ್ನಡಿಗರಿಗೆ ತೊಂದರೆಯಾದ್ರೆ ಕಠಿಣ ಕ್ರಮ ಜರುಗಿಸ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.(ಎಸ್.ಎಂ)