
ಮೈಸೂರು
ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರುಗಳ ರಕ್ಷಣೆ
ಮೈಸೂರು,ಮೇ.25:- ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕರುಗಳನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಂಧಿತರನ್ನು ಮೈಸೂರಿನ ಮಹಮದ್ ಖಾನ್ ಹಾಗೂ ಪೈಜಾನ್ ಷರೀಪ್ ಎಂದು ಗುರುತಿಸಲಾಗಿದೆ. ಕರುಗಳನ್ನು ಚೀಲದಲ್ಲಿ ಸುತ್ತಿ ಶ್ರೀರಂಗಪಟ್ಟಣದ ಗಂಜಾಂನಿಂದ ಆಕ್ಟಿವಾ ಹೊಂಡದಲ್ಲಿ ಮೈಸೂರಿನ ಕಸಾಯಿ ಖಾನೆಗೆ ಸಾಗಿಸುವಾಗ ಪಟ್ಟಣ ಪೊಲೀಸರು ದಾಳಿ ನಡೆಸಿ, ಕರುಗಳನ್ನು ರಕ್ಷಿಸಿದ್ದಾರೆ. ಮೈಸೂರಿನ ಪಿಂಜಾರಾ ಪೋಲ್ ಗೆ ಸಾಗಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ:ಕೆ.ಎಸ್.ಎಸ್.ಎಚ್)