
ಸುದ್ದಿ ಸಂಕ್ಷಿಪ್ತ
ರೇಣುಕಾದೇವಿ ಎಂ.ಪಿ ಅವರಿಗೆ ಪಿಹೆಚ್.ಡಿ ಪದವಿ
ಮೈಸೂರು, ಸೆ.6: ಡಾ. ಪಿ.ವೀರಪ್ಪನ್ ಅವರ ಮಾರ್ಗದರ್ಶನದಲ್ಲಿ ರೇಣುಕಾದೇವಿ ಎಂ.ಪಿ ಅವರು ದಕ್ಷಿಣ ಭಾರತದ ಅಧ್ಯಯನ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ “ಕುವೇಂಪು ಮತ್ತು ಸುಬ್ರಹ್ಮಣ್ಯ ಭಾರತಿಯವರ ಕವಿತೆಗಳ ತೌಲನಿಕ ಸಮೀಕ್ಷೆ” ಎಂಬ ಮಹಾಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ. ಮುಂದಿನ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿಯನ್ನು ಪಡೆಯಬಹುದಾಗಿದೆ. ( ವರದಿ:ಪಿ.ಜೆ )